ಬೆಂಕಿಯ ಮೂಲ

ಉರಿಯುತ್ತಿದೆ ಬೆಂಕಿ
ಧಗಧಗ
ಕೆನ್ನಾಲಿಗೆಯ ಚಾಚಿ
ಭಗ ಭಗ
ಮುಗಿಲೆತ್ತರ ವ್ಯಾಪಿಸಿ
ಆಕ್ರಮಿಸುತ್ತಿದೆ ಉದ್ದಗಲ
ನೋಡಲೆಷ್ಟು ಚೆನ್ನ
ಸಪ್ತ ವರ್ಣಗಳ ನರ್ತನ
ಕಣ್ತುಂಬಿಸಿ ಮನ ತುಂಬಿಸಿ
ಆನಂದಿಸುವ ಪರಿ
ಕೇಕೆ ಹಾಕಿದ ಕೂಗಿಗೆ
ಮುಗಿಲಲ್ಲಿ ಪ್ರತಿಧ್ವನಿ
ಒಬ್ಬರಿಗಾದರೂ ಇಲ್ಲ ಬೆಂಕಿ
ಆರಿಸುವ ಎದೆಗಾರಿಕೆ.
ಉರಿವ ಬೆಂಕಿಗೆ ತುಪ್ಪ
ಸುರಿದು ಮೈ ಕಾಯಿಸುವ ಉನ್ಮಾದ
ಬೆಂಕಿ ಹತ್ತಿದಾದರೂ ಹೇಗೆ?
ಯಾರು ಹೊತ್ತಿಸಿದರೋ
ಯಾಕೆ ಹತ್ತಿಸಿದರೋ
ಅರಿಯುವುದಾದರೂ ಎಲ್ಲಿ?
ಋಷಿ ಮೂಲ, ನದಿ ಮೂಲ
ಬೆಂಕಿಯ ಮೂಲ
ಅರಿಯದಿರುವುದೇ ಜಾಣತನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಸುಮ್ಮನೆ ದುಃಖ
Next post ನಾನು ಹೂವು ಮಧುರ ಮಾವು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys